ನೆಮ್ಮದಿಯೆಲ್ಲೆಡೆಗೆ

ನೆಮ್ಮದಿಯು ಸರ್ವರಿಗೆ ನೆಮ್ಮದಿಯು ಎಲ್ಲೆಡೆಗೆ
ನೆಮ್ಮದಿಯು ಭೂತಳದ ದೇಶಗಳಿಗೆಲ್ಲ

ಆನಂದವೆಲ್ಲರಿಗೆ ಆನಂದವೆಲ್ಲೆಡೆಗೆ
ಆನಂದವಿರಲೆಲ್ಲ ರಾಷ್ಟ್ರಗಳಲೆಲ್ಲ
ನೆಮ್ಮದಿಯು ಚೆಂಗುಲಾಬಿಯ ಬೆಳಗಿನಂತೆ
ಆನಂದ ನಸುನಗುವ ವಸಂತನಂತೆ

ಒಬ್ಬನಿಗೆ ಎಲ್ಲರೂ ಪ್ರತಿಯೊಬ್ಬನೆಲ್ಲರಿಗೆ
ಇದುವೆ ಬಾಳುವೆಯಲ್ಲೆ ಬಂಗಾರ ನಿಯಮ
ಜೀವನವು ಬೆಳಕು ಮೇಣ್ ಪ್ರೀತಿಗಳು ಎಲ್ಲರಿಗೆ
ಜೀವಿಗಳಿಗೆಲ್ಲರಿಗೆ ಪ್ರೇಮ ನಿಸ್ಸೀಮ

ಎಲ್ಲರಿಗೆ ಕಾಯಕವು ಅನ್ನ ಬಟ್ಟೆಗಳಿರಲಿ
ಸರಿಸಮತೆ ನೆಲಗೊಳ್ಳಲೆಲ್ಲರಲ್ಲಿ
ಮನೆ ಶಾಲೆ ಆರೋಗ್ಯವನುಕೂಲವೆಲ್ಲರಿಗೆ
ಸಂತಸದ ಜಗವಿರಲಿ ಎಲ್ಲೆಡೆಯಲಿ

ಸೋಮಾರಿ ಸಿರಿತನವು ಬರಿಹೊಟ್ಟೆ ಭಿಕ್ಷುಕರು
ಬೇಡವೈ ಎಲ್ಲರೂ ಸಮ ಕೆಲಸದಲ್ಲಿ
ಕಣ್ಣೀರ ಕರೆಬೇಡ ಅಂಜಿಕೆಯ ಪರಿಬೇಡ
ನಗುವುಕ್ಕಿ ಹರಿಯಲೀ ಎಲ್ಲರೆದೆಯಲ್ಲಿ

ಅಣುಶಕ್ತಿ ಭಯಬೇಡ ಸಿರಿರಾಷ್ಟ್ರ ಬಲಬೇಡ
ಯುದ್ಧ ರಾಕ್ಷಸನಿಗೋ ಸ್ಥಳವೆ ಬೇಡ
ಮರದ ಎಲೆಗಳ ರೀತಿ ಸೂರ್ಯಕಿರಣಗಳಂತೆ
ನಾವೆಲ್ಲ ದಿವ್ಯ ಮಾನವರು ನೋಡ

ನಿನ್ನೊಳಗಿನೊಳತಿರುಳು ಎಲ್ಲರೊಳಿತಿಗೆ ತುಡಿದು
ನಿನ್ನ ಜೀವವು ಎಲ್ಲ ಜೀವಗಳಿಗಾಗಿ
ನಿನ್ನ ದೇವರು ಎಲ್ಲ ಜನರಲ್ಲು ತುಂಬಿಹನು
ನಿನ್ನ ಪ್ರೀತಿಯು ಎಲ್ಲ ಮಾನವರಿಗಾಗಿ

ಅವನಿಗೋ ಅವಳಿಗೋ ಪ್ರತಿಯೊಬ್ಬ ವ್ಯಕ್ತಿಗೋ
ಸಹಬಾಳ್ವೆಯೇ ಬೆಳಕು ಅತ್ಯುತ್ತಮಾ
ಪಾಶ್ಚಾತ್ಯ ಪೌರಾತ್ಯ ಭೂಬಂಧುಗಳಿಗೆಲ್ಲ
ವಿಶ್ವ ಮಾನವ ಧರ್ಮ ಅತ್ಯುತ್ತಮ

ಸಸ್ಯ ಸಂತತಿಗೆಲ್ಲ ಪ್ರಾಣಿ ಪಕ್ಷಿಗಳಿಗೂ
ಗಿರಿಗಳಿಗೆ ವನಗಳಿಗೆ ಕಳಕಳದ ಹೊಳೆಗೆ
ನೆಲ ಜಲಕೆ ತಿರೆ ವಾಯು ಪಂಚಭೂತದ ಜಗಕೆ
ಚೈತನ್ಯ ನೆಮ್ಮದಿಯು ತುಂಬಿ ಬೆಳಗೆ

ಎಲ್ಲರಿಗೂ ನೆಮ್ಮದಿಯು ಎಲ್ಲೆಡೆಗು ನೆಮ್ಮದಿಯು
ಅಮರ ಶಾಂತಿಯ ದಿವ್ಯ ಭವ್ಯ ನೆಮ್ಮದಿಯು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನವ ಸರ್ವಶ್ರೇಷ್ಠನೇ ?
Next post ಲಿಂಗಮ್ಮನ ವಚನಗಳು – ೫೮

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

cheap jordans|wholesale air max|wholesale jordans|wholesale jewelry|wholesale jerseys